ವಿ ಜಿ ಭಟ್ಟರಿಗೆ

ನವ್ಯದಪಿತಾಮಹರೆಂದು ವಿಮರ್ಶಕಜನ
ಕಟ್ಟಿದರೂನು ನಿಮಗೆ ಪಟ್ಟ
ಏರಲಿಲ್ಲ ನೀವಾ ಅಟ್ಟ

ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು
ಹಿಡಿದಿರಿ ನಿಮ್ಮದೆ ದಿಕ್ಕು
ನೀವು ಸುಮ್ಮನೆ ನಕ್ಕು

ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ
ಸರ್ವರನು ನಾಚಿಸುವ ತರ
ಗ್ರಹಿಸಿದ್ದು ಸಂಸಾರ ಸಾರ

ಇನ್ನು ಮುಗಿಯಿತು ದಾರಿಯೆನ್ನುತಿರುವಂತೆಯೆ
ಕಾಣಿಸುವುದಿನ್ನೊಂದು ತಿರುವು
ಹೊಸ ಮಾತುಗಳ ಬರವು

ಆಚೆ ಆತ್ಮದ ಶೋಧ ಈಚೆ ಕಾಂತನ ವಿಷಾದ
ನಡುವೆ ಸಲ್ಲುವ ಕಾಲ
ಪಡೆದು ಸರ್ವಸ್ವ ಫಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕೀರ್ಣತೆಯಲ್ಲಿಯೇ ಕ್ರೀಯಾಶೀಲತೆ ಕಂಡ – ಟಿ.ಎಸ್ ಏಲಿಯಟ್
Next post ಪದಗಳೊಂದಿಗೆ ನಾನು

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys